ವಡಗೆರೆ ಗ್ರಾಮದಲ್ಲಿ ಬಿಲ್ವ ಮರ ದೀಕ್ಷಾ ಕಾರ್ಯಕ್ರಮ

ದೊಡ್ಡಬಳ್ಳಾಪುರ:ಪ್ರತಿ ಗ್ರಾಮದಲ್ಲೂ ಭಕ್ತಿಯ ಸಂಖ್ಯೇತವಾಗಿ ದೇವರುಗಳ ಆರಾಧನೆ ಹಾಗು ಪ್ರತಿ ಮನೆಯಲ್ಲೂ ಹಿರಿಯರು ಶಿವ ಪೂಜೆ ಮಾಡುವುದರಿಂದ ಮಕ್ಕಳಿಗೆ ದೈವ ಭಕ್ತಿ ಗುರು ಹಿರಿಯರ ಬಗ್ಗೆ ಗೌರವಿಸುವುವಂತಹ ಸಂಸ್ಕಾರ ಬೆಳೆಸಿಕೊಳ್ಳುವಂತೆ ಚಿಕ್ಕಂದಿನಿಂದಲೇ ಮನೆಯಲ್ಲಿ ಹೇಳಿಕೊಟ್ಟರೆ ದೈವದ ಬಗ್ಗೆ ಭಕ್ತಿ ಹುಟ್ಟುತ್ತದೆ ಎಂದು ಖಾನಿ ಮಠದ ಮಠ ಅಧ್ಯಕ್ಷ ಬಸವರಾಜ ಸ್ವಾಮೀಜಿಗಳು ಹೇಳಿದರು.

ಅವರು ಮಧುರೆ ಹೋಬಳಿ ವಡಗೆರೆ ಗ್ರಾಮದಲ್ಲಿ ಬಿಲ್ವ ಮರ ದೀಕ್ಷಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಶಿವನಿಗೆ ಪುಷ್ಪಗಳಲ್ಲಿ ಅತ್ಯಂತ ಪ್ರಿಯವಾದದ್ದು ಬಿಲ್ವಪತ್ರೆ ಅರ್ಪಿಸುವುದರಿಂದ ನಮ್ಮ ಪಾಪವು ಪರಿಹಾರವಾಗಿ ಪುಣ್ಯ ಪ್ರಾಪ್ತಿಯಾಗುವುದು. ಪೂಜೆಗೆ ಉಪಯೋಗಿಸುವ ಬಿಲ್ವಪತ್ರೆ ಮರವನ್ನು ದೀಕ್ಷೆ ಮಾಡುವುದರಿಂದ ಆ ಮರವು ಶ್ರೇಷ್ಠತೆಯನ್ನು ಪಡೆಯುತ್ತದೆ ಎಂದು ಹೇಳಿದರು.
ಪ್ರೀತಿ ಮನೆಯಲ್ಲಿಯೂ ಹಿರಿಯರು ಶಿವ ಪೂಜೆ ಮಾಡುವುದರ ಮೂಲಕ ಮಕ್ಕಳಲ್ಲಿ ಸಂಸ್ಕಾರವನ್ನು ಮೂಡಿಸಬೇಕು ದೇವರಲ್ಲಿ ಭಕ್ತಿ ಹಿರಿಯರಲ್ಲಿ ಗೌರವ ಇವುಗಳನ್ನು ಮಕ್ಕಳಲ್ಲಿ ಚಿಕ್ಕಂದಿನಿಂದಲೇ ಮನೆಗಳಲ್ಲಿ ಹಿರಿಯರು ಮೂಡಿಸುವಂತೆ ಮಾದರಿ ಯಾಗಿರಬೇಕು ಎಂದರು. ಕಾರ್ಯಕ್ರಮಕ್ಕೂ ಮೊದಲು ಊರಿನ ಎಲ್ಲಾ ದೇವತೆಗಳ ಮೆರವಣಿಗೆ ಹಾಗೂ ಪ್ರತಿ ಮನೆಯಿಂದಲೂ ಗಂಗೆಯನ್ನು ತಂದು ಬಿಲ್ವ ಮರದ ದೀಕ್ಷೆಯನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶಿಕ್ಷಕರಾದ ಕರಿಯಪ್ಪ, ನಾಗದೇವ್,ಬೆಟ್ಟಯ್ಯ, ಪ್ರಸನ್ನಕುಮಾರ್, ಜ್ಯೋತಿ ಕುಮಾರ್, ಶಂಕರ್ ಮೂರ್ತಿ , ಸತ್ಯಾನಂದ ಮೂರ್ತಿ, ಸದಾನಂದ,ಅನಂತರಾಮು, ವಿರುಪಾಕ್ಷ, ಪ್ರಸಾದ್,ಪ್ರಕಾಶ್ ಇನ್ನು ಮುಂತಾದವರು ಭಾಗವಹಿಸಿದ್ದರು