ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಳ್ಳಕಟ್ಟಮ್ಮ ದೇವಸ್ಥಾನ ಕ್ಕೆ ಒಂದು ಲಕ್ಷ ಅನುದಾನ
ದೊಡ್ಡಬಳ್ಳಾಪುರ:ತಾಲೋಕಿನ ಮಧುರೆ ಹೋಬಳಿ ಮಾರಸಂದ್ರ ಗ್ರಾಮದ ಮುಳಕಟ್ಟಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ 1 ಲಕ್ಷ ಅನುದಾನ ಮಂಜೂರಾತಿ ಆಗಿದ್ದು ಇಂದು 1ಲಕ್ಷ ಡಿಡಿ ಯನ್ನ ದೇವಾಲಯದ ಜೀರ್ಣೋದ್ದಾರ ಸಮಿತಿಗೆ ನೀಡಲಾಯಿತು.
ದೊಡ್ಡಬಳ್ಳಾಪುರ ತಾಲ್ಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನಾಧಿಕಾರಿ ಯಾದ
ಶ್ರೀಮತಿ ಸುಧಾ ಭಾಸ್ಕರ್ ನಾಯಕ್ ರವರು 1 ಲಕ್ಷದ DD ಯನ್ನು ದೇವಾಲಯ ಸಮಿತಿ ಗೆ ಹಸ್ತಾಂತರ ಮಾಡಿದರು
ಈ ಸಂದರ್ಭದಲ್ಲಿ. ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆಂಪಹನುಮಯ್ಯ, ಗ್ರಾಂ. ಪಂ. ಸದಸ್ಯರಾದ ಶೋಭಾ ಕೃಷ್ಣಮೂರ್ತಿ ,ವಲಯದ ಮೇಲ್ವಿಚಾರಕರಾದ ಶ್ರೀಮತಿ ಗಿರಿಜಾ,ದೇವಸ್ಥಾನದ ಅರ್ಚಕರು, ಸಮಿತಿ ಸದಸ್ಯರು, ಸೇವಾ ಪ್ರತಿನಿಧಿ ದೇವಿಕಾ, ಸಂಘದ ಸದಸ್ಯರು ಹಾಗು ಸಾರ್ವಜನಿಕರು ಹಾಜರಿದ್ದರು.