ಹಮಾಮ್ ಗ್ರಾಮದಲ್ಲಿ ಸಿ. ಸಿ. ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜು ಚಾಲನೆ
ದೊಡ್ಡಬಳ್ಳಾಪುರ:ತಾಲ್ಲೂಕಿನ,ಕೊನಘಟ್ಟ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಮಾಮ್ ಗ್ರಾಮದಲ್ಲಿ ದೊಡ್ಡಬಳ್ಳಾಪುರ ಶಾಸಕರ ಅನುದಾನದಲ್ಲಿ ಸಿಸಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಶಾಸಕರಾದ ಧೀರಜ್ ಮುನಿರಾಜು ರವರು ಗುದ್ದಲಿ ಪೂಜೆ ನೇರವೇರಿಸಿದರು.
ಅವರು ಮಾತನಾಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿ ಉತ್ತಮ ಅರೋಗ್ಯ ಕಲ್ಪಿಸುವ ಸಲುವಾಗಿ ಗ್ರಾಮದ ನೈರ್ಮಲ್ಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಗ್ರಾಮಗಳಲ್ಲಿ ಚರಂಡಿಗಳ ಅವ್ಯವಸ್ಥೆಯಿಂದ ಅದ ಗಟ್ಟು ಚರಂಡಿ ನೀರು ಹರಿಯದೇ ಒಂದೆಡೆ ನಿಂತು ರೋಗ ರುಜಿನಗಳು ಶುರುವಾಗುತ್ತಿವೆ. ಮನುಷ್ಯ ಆರೋಗ್ಯದಿಂದ ಇರಬೇಕಾದರೆ ಶುಚಿತ್ವವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು
ಈ ಸಂದರ್ಭದಲ್ಲಿ ಬಿಜೆಪಿಯ ತಾಲ್ಲೂಕು ಅಧ್ಯಕ್ಷರಾದ ನಾಗೇಶ್ ಸೇರಿದಂತೆ ಕೊನಘಟ್ಟ ಗ್ರಾಮಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ರವರು, ಉಪಾಧ್ಯಕ್ಷರಾದ ಸುಮಂಗಲ ರವರು, ಸದಸ್ಯರಾದ ಬಾಲರಾಜು, ಆರಾಧ್ಯ ಆರ್ ಎಲ್, ಮಂಜುನಾಥ್, ಅಶ್ವತ್ತಪ್ಪ ಪ್ರಭಾಕರ್, ಬಸವರಾಜು
ಪ್ರಕಾಶ್, ನಾಗೇಶ್ ಟಿ ಎ ಪಿ ಎಂ ಸಿ, ಎಂ ಪಿ ಸಿ ಎಸ್ ಸದಸ್ಯರ ರಾಮಾಂಜಿನಪ್ಪ ಕೆ ಎಮ್ ಹಾಗೂ ಗ್ರಾಮದ ಮುಖಂಡರಾದ ಮಂಜುನಾಥ್ ಮಂಜುನಾಥಸ್ವಾಮಿ ಪೆದ್ದಣ್ಣ
ಗೋವಿಂದಸ್ವಾಮಿ, ತಿಮ್ಮರಾಜಪ್ಪ, ಸಂಜೀವಪ್ಪ, ಶ್ರೀನಿವಾಸ್ ವಿ ಎಸ್ಎಸ್ ಎನ್
ನಂಜಪ್ಪ, ಹಾಗೂ ಕೊನಘಟ್ಟ ಗ್ರಾಮಪಂಚಾಯಿತಿ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ
ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.