ಬಾಬಾ ಸಾಹೇಬರ ಹಾದಿಯಲ್ಲಿ ಹೊರಟರೆ ಬದುಕು ನೆಮ್ಮದಿಯಿಂದ ಕೂಡಿರುತ್ತದೆ–ಜಿ.ರಾಜ್ ಗೋಪಾಲ್

ದೊಡ್ಡಬಳ್ಳಾಪುರ:ನಿಜವಾದ ಜ್ಞಾನಿಗಳು ಬಾಬಾ ಸಾಹೇಬರ ನಡೆ ಹಾಗೂ ಬುದ್ಧನ ದಾರಿಯಲ್ಲಿ ಅರಿತು ಹೊರಟರೆ ಇಡೀ ಜಗತ್ತೇ ಬುದ್ಧನ ಧಮ್ಮಕ್ಕೆ ಪರಿವರ್ತನೆ ಹೊಂದಿದರೂ ಆಶ್ಚರ್ಯ ವೇನಿಲ್ಲ ಎಂದೂ ಸಮಾಜ ಸೇವಕ ಜಿ. ರಾಜಗೋಪಾಲ್ ರವರು ಅಭಿಪ್ರಾಯಪಟ್ಟರು. ಇವರು ಡಾ. ಬಿ.ಆರ್ ಅಂಬೇಡ್ಕರ್ ರವರ ಅಧ್ಯಯನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ ಆಯೋಜಿಸಿದ್ದ 68ನೇ ಬಾಬಾ ಸಾಹೇಬರ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತಾಡುತ್ತಾ, ನಿಜವಾಗಿ ಬಾಬಾಸಾಹೇಬರು ದಾರಿಯಲ್ಲಿ ನಾವು ಹೊರಟರೆ ನಮ್ಮೆಲ್ಲರ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಇಂದಿನ ಜಗತ್ತಿಗೆ ಬಾಬಾ ಸಾಹೇಬರ ಜ್ಞಾನ, ಬುದ್ಧನ ಮೈತ್ರಿ ಹಾಗೂ ಬಸವಣ್ಣನ ಕ್ರಾಂತಿ ಪ್ರಸ್ತುತವಾಗಿವೆ ಎಂದು ವಿದ್ಯಾರ್ಥಿಗಳಿಗೆ ಪರಿನಿರ್ವಾಣದ ಮಹತ್ವವನ್ನು ತಿಳಿಸಿದರು. ಈ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಂಡಿಸಿದ ಡಾ.ಪ್ರಕಾಶ್ ಮಂಟೇದ ರವರು ಬುದ್ಧನ ಪರಿನಿಬ್ಬಾಣವು ಬಹುಶಹ ಇಂದಿನ ಅನುಭೋಗ ಜಗತ್ತಿನ ರೋಗಗ್ರಸ್ಥ ಜನಕ್ಕೆ ಮದ್ದಾಗಬಲ್ಲದು ಹಾಗೂ ಬಾಬಾ ಸಾಹೇಬರು ಬುದ್ಧನನ್ನು ಕುರಿತು ಚಿಂತಿಸಿದ ಬಗೆ ಸರ್ವರ ಸುಖ ಶಾಂತಿಯ ನೆಮ್ಮದಿ ತತ್ವವನ್ನು ಹೇಳುತ್ತದೆ‌. ಅವರು ಹೇಳಿದಂತೆ, ನಾವು ತ್ಯಾಗ, ತಾಳ್ಮೆ ಮತ್ತೂ ನಿಶ್ವಾರ್ಥತೆಯಿಂದ ನಮ್ಮ ಬಲವನ್ನೆಲ್ಲ ಒಗ್ಗೂಡಿಸಿ ಕಾರ್ಯನಿರ್ವಹಿಸಬೇಕಿದೆ. ಈ ದಿಶೆಯಲ್ಲಿ ಮುಂದೆ ಅಂಬೇಡ್ಕರ್ ಅಧ್ಯಯನ ಕೇಂದ್ರವು ಬಾಬಾ ಸಾಹೇಬರ ಸಮಾಜೋರ್ಥಿಕ ಆಧ್ಯಾತ್ಮಿಕ ವಿಚಾರಗಳನ್ನು ಯುವ ಜನತೆಯ ಜೊತೆ ಹಂಚುವ ಪ್ರಯತ್ನವನ್ನು ಮಾಡುತ್ತದೆ ಎಂದರು..ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ ಅವರು ಬಾಬಾ ಸಾಹೇಬರ ಜ್ಞಾನ ಮೇಧಾ ಶಕ್ತಿ ಎಲ್ಲವೂ ನಮ್ಮ ನಡೆ ನುಡಿ ಒಳಗೆ ಪ್ರಕಟವಾಗಬೇಕೆಂದು ಆಗ್ರಹ ಪಡಿಸಿದರು.ಈ ಕಾರ್ಯಕ್ರಮಕ್ಕೆ ಪ್ರೊ. ನೀರಜಾ ದೇವಿ ಎಲ್ಲರನ್ನೂ ಸ್ವಾಗತಿಸಿದರು ಹಾಗೆ ಕಾರ್ಯಕ್ರಮವನ್ನು ಡಾ. ಶೋಭಾ ಮಲ್ಹಾರಿ ಅವರು ನಿರೂಪಿಸಿದರು . ವಿನೋದ್ ಗ್ರಂಥಪಾಲಕರು ಎಲ್ಲರನ್ನು ವಂದಿಸಿದರು.ಈ ಕಾರ್ಯಕ್ರಮದಲ್ಲಿ ಡಾ. ಬಿ. ಆರ್ ಗಂಗಾಧರಯ್ಯ, ಪ್ರೊ.ಡೊರೀನ್ ಸ್ನೇಹಲತ, ಪ್ರೊ. ಲಲಿತಮ್ಮ ಹಾಗೂ ಡಾ. ಸತೀಶ್ ಇಟಗಿ , ಇನ್ನು ಮುಂತಾದವರು ಭಾಗವಹಿಸಿದ್ದರು.