ಮಧುರೆ ಶನಿಮಹಾತ್ಮ ಸ್ವಾಮಿ ರಥೋತ್ಸವ ಸಂಪನ್ನ
ದೊಡ್ಡಬಳ್ಳಾಪುರ:ಮಧುರೆ ಹೋಬಳಿ ಕನಸವಾಡಿಯ( ಚಿಕ್ಕಮಧುರೆ) ಶನಿ ಮಹಾತ್ಮ ಸ್ವಾಮಿ ಬ್ರಹ್ಮರಥೋತ್ಸವ
ಮಾರ್ಚ್ 9 ರಂದು ಮಧ್ಯಾಹ್ನ 1 ಗಂಟೆ 35 ನಿಮಿಷಕ್ಕೆ ಸರಿಯಾಗಿ ವಿಜೃಂಭಣೆಯಿಂದ ನೇರ ವೇರಿಸಲಾಯಿತು
ಜಿಲ್ಲೆಯ ದೇವನಹಳ್ಳಿ ಹೋಸಕೊಟೆ ನೆಲಮಂಗಲ ಹಾಗು ನೇರೆ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ತುಮಕೂರು ಜಿಲ್ಲೆಗಳಿಂದ ಹಾಗು ರಾಜ್ಯದ ನಾನಾ ಭಾಗಗಳಿಂದ ಬಂದ ಭಕ್ತರು ರಥಕ್ಕೆ ಹಣ್ಣ ದವನ ಅರ್ಪಿಸಿ ದೈನ್ಯತೆ ಮೇರೆದರು.
ಬ್ರಹ್ಮ ರಥೋತ್ಸವದ ಅಂಗವಾಗಿ ಶ್ರೀ ಸ್ವಾಮಿಗೆ ಮುಂಜಾನೆಯಿಂದ ದೇವಾಲಯದಲ್ಲಿ ಗಣಪತಿ ಪ್ರಾರ್ಥನೆ, ಧ್ವಜಾರೋಹಣ, ವಿವಿಧ ಹೋಮಗಳು ನಡೆಯದವು ಕಲಶಾರ್ಚನೆ ಶ್ರೀ ಮಹಾಗಣಪತಿ, ನವಗ್ರಹ, ಶ್ರೀ ಶನೇಶ್ವರ ಹೋಮ ಪೂಜಾ ಕೈಂ ಕಾರ್ಯಗಳು ನೆಡೆದವು
ಮಧ್ಯಾಹ್ನ 1ಗಂಟೆ 35 ನಿಮಿಷಕ್ಕೆ. ಶ್ರೀ ಶನೇಶ್ವರ ಸ್ವಾಮಿಯ ಬ್ರಹ್ಹರಥೋತ್ಸವ ನೇರವೇರಿಸಲಾಯಿತು.
ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ವಿವಿಧ ಗ್ರಾಮಗಳಿಂದ ಪಾನಕ, ಕೋಸಂಬರಿಗಳನ್ನು ಮಾಡಿಕೊಂಡು ಬಂದಿದ್ದ ರೈತರು ಎತ್ತಿನ ಗಾಡಿಗಳಲ್ಲಿ ತಂದು ಭಕ್ತಾದಿಗಳಿಗೆ ಹಂಚಿಕೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ರಥೋತ್ಸವಕ್ಕೂ ಮುನ್ನ ಶನಿ ಮಹಾತ್ಮಸ್ವಾಮಿ ಮೆರವಣಿಗೆ ದೇವರನ್ನು ಪಾನಕ ಹಂಚಿಕೆ ಸ್ಥಳಕ್ಕೆ ಹೊತ್ತುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು.
ಹಾಗು ಮಾರ್ಚ್ 10 ರ ರಾತ್ರಿ 7.30ಕ್ಕೆ ಬೆಳ್ಳಿ ರಥದಲ್ಲಿ ಕಾಕ ವಾಹನೋತ್ಸವ, ತಮಟೆ ವಾದ್ಯ, ವೀರಗಾಸೆ ಕುಣಿತ, ಸಂಗೀತ ರಸ ಸಂಜೆ ಕಾರ್ಯಕ್ರಮಗಳು ನಡೆಯಲಿವೆ.
ಬ್ರಹ್ಮ ರಥೋತ್ಸವದ ಅಂಗವಾಗಿ ಒಂದು ವಾರದ ಕಾಲ ನಡೆಯುವ ಜಾತ್ರೆಯಲ್ಲಿ ವಿವಿಧ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕೋತ್ಸವ ನಡೆಯಲಿವೆ.
ರಥೋತ್ಸವದ ಪ್ರಯುಕ್ತ ಪ್ರತಿದಿನ ರಾತ್ರಿ ನಡೆಯುವ ನಾಟಕೋತ್ಸವದಲ್ಲಿ ಭಾಗವಹಿಸುವ ತಂಡಗಳಿಗೆ ದೇವಾಲಯದ ವತಿಯಿಂದ 6,500 ರೂಪಾಯಿಗಳ ಪ್ರೋತ್ಸಾಹ ಧನ ನೀಡಲಾಗುವುದು ಎಂದು ದೇವಾಲಯದ ಧರ್ಮದರ್ಶಿ ಕೆ.ವಿ.ಪ್ರಕಾಶ್ ತಿಳಿಸಿದ್ದಾರೆ.