ಭರತ ನಾಟ್ಯ ಕಲಾವಿದೆ ಗೆ ಅಪ್ರತಿಮ ಗುರು ಪುರಸ್ಕಾರ
ದೊಡ್ಡಬಳ್ಳಾಪುರ : ನಗರದ ಭರತನಾಟ್ಯ ಕಲಾವಿದೆ ಎಂ ಕೆ ನವ್ಯಶ್ರೀ ಇವರಿಗೆ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಪ್ರತಿಮ ಗುರು ಪುರಸ್ಕಾರ (ರಾಷ್ಟ್ರ ಪ್ರಶಸ್ತಿ) ನೀಡಿ ಗೌರವಿಸಲಾಯಿತು.
ಇದೆ ಫೆಬ್ರವರಿ 15 ರಿಂದ 17 ವರೆಗೆ ರಾಜಸ್ಥಾನದ ಜೈಪುರ್ ನಲ್ಲಿ ಬೆಂಗಳೂರಿನ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಾಟ್ಯ ಮಿಲನ 2025 ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು, ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ನಗರದ ಭರತನಾಟ್ಯ ಕಲಾವಿದೆ ಎಂ ಕೆ ನವ್ಯಶ್ರೀ ಭಾಗವಹಿಸಿ ಭರತನಾಟ್ಯ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಕಲಾವಿದೆ ಎಂ ಕೆ ನವ್ಯಶ್ರೀ ಇವರಿಗೆ ಸಂಸ್ಥೆವತಿಯಿಂದ ಅಪ್ರತಿಮ ಗುರು ಪುರಸ್ಕಾರ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಕುರಿತು ಪ್ರಶಸ್ತಿ ಪಡೆದ ಕಲಾವಿದೆ ಎಂ ಕೆ ನವ್ಯಶ್ರೀ ಮಾತನಾಡಿ ಪುರಸ್ಕಾರ ಹಾಗೂ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ , ಇಂದು ನನಗೆ ಲಭಿಸಿರುವ ಅಪ್ರತಿಮ ಗುರು ಪುರಸ್ಕಾರವು ನನ್ನೆಲ್ಲ ಪೂಜ್ಯ ಗುರುಗಳಿಗೆ ಅರ್ಪಿಸುತ್ತೇನೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಆಶಯವಿದೆ ಎಂದರು.
ಈ ಸಂದರ್ಭದಲ್ಲಿ ಚಿಗುರು ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ ನ ಮುಖ್ಯಸ್ಥರು ಪದಾಧಿಕಾರಿಗಳು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.